25/08/2023
ಶ್ರೀ ಪಲಿಮಾರು ಮಠದ ಅಂಗ ಸಂಸ್ಥೆಯಾದ ತತ್ವ ಸಂಶೋಧನ ಸಂಸತ್ತಿನ ವತಿಯಿಂದ ಮಹಾಭಾರತ ತಾತ್ಪರ್ಯ ನಿರ್ಣಯದ ಆಂಗ್ಲ ಭಾಷೆಯ ಸರಣಿಗಳಲ್ಲಿ ನಾಲ್ಕನೇ ಭಾಗ (24 ಅಧ್ಯಾಯದಿಂದ-32 ಅಧ್ಯಾಯದವರೆಗೆ) ಗ್ರಂಥದ ಲೋಕಾರ್ಪಣೆ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯಿತು. ಚೆನ್ನೈ ನಗರದಲ್ಲಿ ಚಾತುರ್ಮಾಸ್ಯದ ಕಾಲದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತದ ಪರ್ವಕಾಲದಲ್ಲಿ ಸಾವಿರಾರು ಭಕ್ತಾಭಿಮಾನಿಗಳ ಸಮಕ್ಷಮದಲ್ಲಿ ಈ ಗ್ರಂಥ ಲೋಕಾರ್ಪಣೆಗೊಂಡಿತು. ಈ ಗ್ರಂಥವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದವರು ಶ್ರೀಮತಿ ಅನುರಾಧ ಶ್ರೀಧರ್ ಇವರು. ಎಲ್ಲಾ ಸಜ್ಜನ ಬಾಂಧವರು ಈ ಗ್ರಂಥದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಅಪೇಕ್ಷಿಸುತ್ತೇವೆ ಗ್ರಂಥ ದೊರೆಯುವ ಸ್ಥಳಗಳು
1.Tattwa Samshodhana Samsat, Udupi
2.Sri Palimaru Matha, Malleshwaram, Bengalore
3.Poornaprajna Vidyapeetha, Bengalore
4.Madhwakart online shopping.
ಚಿತ್ರ ಕೃಪೆ : Shri Shishira Jois