Book Circle

Book Circle Book Store

 #ಹೊಸ_ಪುಸ್ತಕಕಾಡಿನೊಳಗೊಂದು ಮನೆಯ ಮಾಡಿಲೇಖಕರು : ಸಂಜಯ್ ಗುಬ್ಬಿಬೆಲೆ         : 190/- (ಶಿಪ್ಪಿಂಗ್ ಸೇರಿ)ಸಂಪರ್ಕಿಸಿ : 099806 33644 "ಕಾ...
08/06/2026

#ಹೊಸ_ಪುಸ್ತಕ
ಕಾಡಿನೊಳಗೊಂದು ಮನೆಯ ಮಾಡಿ

ಲೇಖಕರು : ಸಂಜಯ್ ಗುಬ್ಬಿ
ಬೆಲೆ : 190/- (ಶಿಪ್ಪಿಂಗ್ ಸೇರಿ)
ಸಂಪರ್ಕಿಸಿ : 099806 33644

"ಕಾಡಿನೊಳಗೊಂದು ಮನೆಯ ಮಾಡಿ" ಪ್ರಸಿದ್ಧ ವನ್ಯಜೀವಿ ವಿಜ್ಞಾನಿ ಹಾಗೂ ಸಂರಕ್ಷಣಾವಾದಿ ಡಾ. ಸಂಜಯ್ ಗುಬ್ಬಿ ಅವರ ನೈಜ ಅನುಭವಗಳ ಅದ್ಭುತ ಕೃತಿಯಾಗಿದೆ. ಪ್ರಸಿದ್ಧ ವಚನಕಾರರ ಸಾಲಾದ "ಕಾಡಿನೊಳಗೊಂದು ಮನೆಯ ಮಾಡಿ ಮೃಗಗಳಿಗಂಜಿ ನಡೆದೊಡೆ ಎಂತಯ್ಯ?" ಎಂಬ ಭಾವವನ್ನು ನೆನಪಿಸುವ ಈ ಶೀರ್ಷಿಕೆ, ಲೇಖಕರು ಕಾಡನ್ನೇ ಮನೆ ಮಾಡಿಕೊಂಡು ಅನುಭವಿಸಿದ ರೋಮಾಂಚಕ ಹಾಗೂ ಸತ್ಯ ಘಟನೆಗಳನ್ನು ಒಳಗೊಂಡಿದೆ.

ಇದು ಕೇವಲ ಕಲ್ಪಿತ ಕಥೆಗಳ ಪುಸ್ತಕವಲ್ಲ; ಬದಲಿಗೆ ಲೇಖಕರು ತಮ್ಮ ದಶಕಗಳ ಕ್ಷೇತ್ರ ಕಾರ್ಯದಲ್ಲಿ (Fieldwork) ಕಂಡ, ಅನುಭವಿಸಿದ ಪ್ರಕೃತಿಯ ವಿಸ್ಮಯಗಳು, ಹುಲಿ-ಚಿರತೆಗಳಂತಹ ವನ್ಯಜೀವಿಗಳ ನಡವಳಿಕೆಗಳು ಮತ್ತು ಅವುಗಳ ಸಂರಕ್ಷಣೆಯ ಹಾದಿಯಲ್ಲಿ ಎದುರಾದ ಸವಾಲುಗಳ ಜೀವಂತ ದಸ್ತಾವೇಜು. ಕಾಡಿನ ನಿಗೂಢತೆ, ವನ್ಯಜೀವಿಗಳ ಉಳಿವಿಗಾಗಿ ನಡೆಯುವ ಹೋರಾಟ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಸೂಕ್ಷ್ಮ ಮುಖಗಳನ್ನು ಈ ಕೃತಿ ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತದೆ.

ಸಾಮಾನ್ಯ ಜನರಿಗೆ ಕಾಡಿನ ಒಳಜಗತ್ತನ್ನು ಪರಿಚಯಿಸುವ ಜೊತೆಗೆ, ಪ್ರಕೃತಿಯ ಬಗ್ಗೆ ನಾವಿಟ್ಟುಕೊಳ್ಳಬೇಕಾದ ಗೌರವ ಮತ್ತು ಕಾಳಜಿಯನ್ನು ಈ ಪುಸ್ತಕವು ಅತ್ಯಂತ ಆಪ್ತ ಶೈಲಿಯಲ್ಲಿ ಮನವರಿಕೆ ಮಾಡಿಕೊಡುತ್ತದೆ.

ಅಂಡಮಾನ್ ಇತಿಹಾಸದೊಳಗೊಂದು ಪಯಣಹಿಂದಿ ಮೂಲ : ಶಕುಂತಳಾ ಶಿವರಾಂಕನ್ನಡಕ್ಕೆ         : ಡಾ. ರಾಜಲಕ್ಷ್ಮೀ ಎನ್‌. ಕೆ.ಮುಖಬೆಲೆ     : 250/- (ಶಿಪ...
05/06/2026

ಅಂಡಮಾನ್ ಇತಿಹಾಸದೊಳಗೊಂದು ಪಯಣ

ಹಿಂದಿ ಮೂಲ : ಶಕುಂತಳಾ ಶಿವರಾಂ
ಕನ್ನಡಕ್ಕೆ : ಡಾ. ರಾಜಲಕ್ಷ್ಮೀ ಎನ್‌. ಕೆ.
ಮುಖಬೆಲೆ : 250/- (ಶಿಪ್ಪಿಂಗ್ ಸೇರಿ)
ಸಂಪರ್ಕಿಸಿ : 099806 33644

ಸಾಮಾನ್ಯವಾಗಿ ಇತಿಹಾಸದ ಪುಸ್ತಕಗಳು ಪ್ರಭುತ್ವದ ಸುತ್ತ ಗಿರಕಿ ಹೊಡೆಯುತ್ತ ಅಕ್ಷರ ರೂಪದಲ್ಲಿ ಅದನ್ನು ಶಾಶ್ವತವಾಗಿಸುವ ನರೇಟೀವ್ ಆಗಿರುತ್ತದೆ. ಆಯಾ ಪ್ರದೇಶಗಳ ಆಡಳಿತದ ಪ್ರಭುತ್ವವನ್ನ ನಿರೂಪಿಸುವ ದಿಕ್ಕೂಚಿಯಾಗಿರುತ್ತದೆ. ಶಕುಂತಳಾ ಶಿವರಾಂರವರು ಪ್ರಭುತ್ವವನ್ನ ಹಿನ್ನೆಲೆಗಿಟ್ಟು ಖೈದಿಗಳ ನೆಲೆಸು ನಾಡಾದ ಅಂಡಮಾನನ್ನು ಆರೋಗ್ಯವಂತ ಸಮಾಜವಾಗಿ ಕಟ್ಟಲು ಹಾಗೂ ಬೆಳೆಸಲು ಶ್ರಮಿಸಿದ ಒಂದು ವರ್ಗ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಪಾತ್ರದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸಹಜೀವನ, ವಿವಿಧತೆಯಲ್ಲಿ ಏಕತೆ, ಭಿನ್ನತೆಯನ್ನ ಸ್ವೀಕರಿಸಿ ಸಂಭ್ರಮಿಸುವಿಕೆ ಇವೆಲ್ಲವೂ ಒಂದು ಆರೋಗ್ಯಪೂರ್ಣ ಸಮಾಜಕ್ಕೆ ಅವಶ್ಯಕ ಅನ್ನುವುದನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ಶಕುಂತಳಾ ಶಿವರಾಂ : ಪೋರ್ಟ್‌ಪ್ಲೇರ್‌ನಲ್ಲಿ

1938ರಲ್ಲಿ ಜನಿಸಿದರು. ವಿದ್ಯಾ ಇಲಾಖೆ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರು ಅಂಡಮಾನ್ ದ್ವೀಪಗಳ ಬಗ್ಗೆ, ಅಲ್ಲಿನ ಸಹ ಜೀವನದ ಸಂಸ್ಕೃತಿಯ ಬಗ್ಗೆ ಅಪರಿಮಿತ ಪ್ರೀತಿ ಉಳ್ಳವರು. ಹಿಂದಿ ಭಾಷೆಯಲ್ಲಿರುವ 'ಅಂಡಮಾನ್ ದ್ವೀಪಗಳು' ಇವರ ಮೊದಲ ಕೃತಿ. 'ಅಂಡಮಾನ್ ಕೆ ಇತಿಹಾಸ ಕ ಸಫರ್' ಇವರ ಎರಡನೆಯ ಕೃತಿಯಾಗಿದೆ.

ಡಾ. ರಾಜಲಕ್ಷ್ಮೀ ಎನ್. ಕೆ. :

ಮಂಗಳೂರಿನಲ್ಲಿ ನೆಲೆಸಿರುವ ಆಂಗ್ಲ ಪ್ರಾಧ್ಯಾಪಕರಾದ ಡಾ. ರಾಜಲಕ್ಷ್ಮೀ ಎನ್. ಕೆ. ಲೇಖಕಿ ಹಾಗೂ ವಿಮರ್ಶಕರಾಗಿ ಗುರುತಿಸಲ್ಪಟ್ಟಿದ್ದಾರೆ. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಇವರ ಲೇಖನಗಳು, ಪುಸ್ತಕಗಳು ಪ್ರಕಟಗೊಂಡಿವೆ. ಅನುವಾದ ಅಧ್ಯಯನ ಹಾಗೂ ಸಂಸ್ಕೃತಿ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರ ಅವರ ಇತ್ತೀಚಿನ ಅನುವಾದಿತ ಕೃತಿ 2024ರಲ್ಲಿ ಪ್ರಕಟವಾದ 'ಸಮ್ಮತಿ ಭಯಪೂರಿತ ಅಸಮರೂಪತೆ.'

ಹುಯೆನ್ ತ್ಸಾಂಗನ ಮಹಾಪಯಣ(2018ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ)ಲೇಖಕರು  : ರವಿ ಹಂಜ್ಬೆಲೆ          : 240/- (ಶಿಪ್ಪಿಂಗ್ ಸೇರ...
05/06/2026

ಹುಯೆನ್ ತ್ಸಾಂಗನ ಮಹಾಪಯಣ

(2018ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ)

ಲೇಖಕರು : ರವಿ ಹಂಜ್
ಬೆಲೆ : 240/- (ಶಿಪ್ಪಿಂಗ್ ಸೇರಿ)
ಸಂಪರ್ಕಿಸಿ : 099806 33644

ಇದು ಕತೆಯೊ, ಕಾದಂಬರಿಯೊ, ಪ್ರವಾಸ ಕಥನವೊ ಅಥವ ಮತ್ತಿನ್ಯಾವ ಪುಸ್ತಕವರ್ಗಕ್ಕೆ ಸೇರಿಸಬೇಕೋ ತಿಳಿಯದು. ಕನ್ನಡದಲ್ಲಿ ಯಾರಿಗಾದರೂ ಭಾರತದ ಇತಿಹಾಸದ ಪುಟಗಳಲ್ಲಿ ಬರುವ ಹುಯೆನ್ ತ್ಸಾಂಗನ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬ ಲವಿರುವವರಿಗೆ ಈ ಕೃತಿ ಸಾಕಷ್ಟು ಮಟ್ಟಿಗೆ ಅವರ ಕುತೂಹಲವನ್ನು ತಣಿಸುತ್ತದೆ. ಇತಿಹಾಸದಲ್ಲಿ ಆಸಕ್ತಿಯಿರದೆ ಮಾರ್ಕೊ ಪೋಲೊ, ಕ್ರಿಸ್ಟೋಫ‌ರ್ ಕೊಲಂಬಸ್ ಅಥವ ವಾಸ್ಕೋಡಿಗಾಮ ರಂತಹ ಸಾಹಸಯಾತ್ರಿಗಳ ಸಾಹಸಗಾಥೆಗಳನ್ನೂ ಅಥವಾ ಮಾನವ ಸಹಜ ಕುತೂಹಲ ಕೆರಳಿಸಿ ಅಕ್ಕಪಕ್ಕ ಪರಿಸರದ ತೊರೆಯ ಮೂಲವನ್ನೋ, ನಿಸರ್ಗದ ನಿಗೂಢಗಳ ಶೋಧಿಸುತ್ತ ಸಾಗುವ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳನು ಮೆಳುವ ದಿಂಡ ಈ ಕೃತಿ ಆಪ್ತವಾಗುತ್ತದೆ.

~ರವಿ ಹಂಜ್

ಪದಾರ್ಥ ಚಿಂತಾಮಣಿಲೇಖಕರು    : ಪಾ.ವಂ. ಆಚಾರ್ಯಮುಖಬೆಲೆ   : 395/-ಶಿಪ್ಪಿಂಗ್      : ಉಚಿತಸಂಪರ್ಕಿಸಿ   : 099806 33644 'ಪದಾರ್ಥ ಚಿಂತಾಮಣ...
04/06/2026

ಪದಾರ್ಥ ಚಿಂತಾಮಣಿ

ಲೇಖಕರು : ಪಾ.ವಂ. ಆಚಾರ್ಯ
ಮುಖಬೆಲೆ : 395/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

'ಪದಾರ್ಥ ಚಿಂತಾಮಣಿ' ಈ ದಿಕ್ಕಿನಲ್ಲಿ [ಪದಪರಂಪರೆ (wordlore) ಎಂಬ ಜ್ಞಾನ ಪ್ರಕಾರಕ್ಕೆ ನಾಂದಿಹಾಕುವ ದಿಕ್ಕಿನಲ್ಲಿ) ಒಂದು ಮಹತ್ವದ ಹೆಜ್ಜೆ. ಇದನ್ನು ರಚಿಸಿರುವವರು ನಮ್ಮ ನಾಡಿನ ವಿರಳ ಬಹುಶ್ರುತರಲ್ಲಿ ಒಬ್ಬರಾದ ಪಾ. ವೆಂ. ಆಚಾರ ಅವರು... ಪ್ರತಿಯೊಂದು ಪದಕ್ಕೂ ಅದರದೇ ಆದ ಚರಿತ್ರೆ ಉಂಟು, ಐತಿಹ್ಯವುಂಟು. ಕಥೆಯುಂಟು. 'ಪದಾರ್ಥ ಚಿಂತಾಮಣಿ'ಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಪದವನ್ನೂ ಈ ದೃಷ್ಟಿಗಳಿಂದ ಕಾಣಲಾಗಿದೆ... ಇದೊಂದು ಅಧ್ಯಯನಪೂರ್ಣ ಪುಸ್ತಕ. ಸಾಹಿತ್ಯ ಹಾಗೂ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಆಚಾರರು ಪಡೆದಿರುವ ಅಪಾರ ತಿಳಿವಳಿಕೆಗೆ ಸಾಕ್ಷಿ.

ಹಾ. ಮಾ. ನಾಯಕ

ಪಾವೆಂ ಅವರ ವ್ಯಂಗ್ಯ ವಿನೋದದ ಶೈಲಿಯನ್ನು ಮೆಚ್ಚಿ ಅವರನ್ನು ಆಗಾಗ ಅಭಿನಂದಿಸಿ ಕಾಗದ ಬರೆಯದೆ ಸಮಾಧಾನವಾಗುತ್ತಿರಲಿಲ್ಲ. ಪಾವೆಂ ಇವರ ಶೈಲಿಯ ಮಾರ್ದವ, ಶ್ರೀರಂಗರ ಪ್ರಖರತೆಯಲ್ಲಿ ಕಾಣದೊರೆಯದಿದ್ದರೆ ಸೋಜಿಗವಲ್ಲ...

- ಶಂ.ಬಾ. ಜೋಶಿ

ಪಾವೆಂ ಬಿಚ್ಚು ಮನಸ್ಸಿನ ಮನುಷ್ಯ ಎನ್ನುವುದು ನನಗೆ ಖಾತ್ರಿಯಾದ್ದು ಅವರು ಬ್ರಾಹ್ಮಣರ ಬಗ್ಗೆ 'ಕಸ್ತೂರಿ'ಯಲ್ಲಿ ಹಿಂದೊಮ್ಮೆ ಬರೆದದ್ದನ್ನು ಓದಿದಾಗ. ಕನ್ನಡದ ಕೆಲವು ಲೇಖಕರು ಜಾತಿಯ ಬಗ್ಗೆ ಪ್ರಶ್ನೆಯನ್ನು ಎತ್ತಿದ ಕ್ರಮ ಸಮಾಜಶಾಸ್ತ್ರದ ದೃಷ್ಟಿಯಿಂದಲೂ ಸಾಹಿತ್ಯದ ದೃಷ್ಟಿಯಿಂದಲೂ ಹಿಂದುಳಿದವರನ್ನು ಜಾಗೃತಗೊಳಿಸುವ ರಾಜಕೀಯದ ದೃಷ್ಟಿಯಿಂದಲೂ ಉಪಯೋಗಕ್ಕೆ ಬಾರದಂತೆ ವ್ಯಕ್ತಿನಿಂದೆ ಮತ್ತು ಅಪಪ್ರಚಾರಗಳಲ್ಲಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಪಾ.ವೆಂ. ಆಚಾರ್ಯರು ವಿಚಲಿತರಾಗದೆ ಬ್ರಾಹ್ಮಣರನ್ನು ಹೇಗೆ ಎಸೆದರೂ ಕಾಲಿನ ಮೇಲೆ ನೆಲ ತಲುಪುವ ಬೆಕ್ಕಿಗೆ ಹೋಲಿಸಿ ತಮ್ಮನ್ನು ತಾವೇ ಪರೀಕ್ಷಿಸಿಕೊಂಡಿದ್ದರು...

- ಯು. ಆರ್. ಅನಂತಮೂರ್ತಿ

ಯಾವ ಸವಲತ್ತು ಸೌಲಭ್ಯಗಳೂ ಇಲ್ಲದೆ, ಅಲ್ಪವೇತನ ಇದ್ದಾಗಲೂ ತನ್ನ ಧರ್ಮಪಾಲನೆಗಾಗಿ ವ್ಯವಸಾಯ, ಅಧ್ಯಯನಗಳನ್ನು ಸಾಗಿಸಿದ ಪಾವೆಂ ಆಂಗ್ಲ ಪ್ರಪಂಚದ ವಾಲ್ಟರ್ ಲಿಪ್‌ಮನ್‌ನಂತೆ ಜ್ಞಾನಕ್ಕೂ (wisdom) ಆರ್ಟ್ ಬುಕ್‌ವಲ್ಡ್‌ನಂತೆ ಬರವಣಿಗೆಯ ಕಾಕು-ವ್ಯಂಗ್ಯ-ವಿನೋದಗಳಿಗೂ ಖ್ಯಾತರಾಗಿದ್ದಾರೆ. ಕನ್ನಡ ಪತ್ರಿಕಾ ರಂಗಕ್ಕೇನೆ ಒಂದು ಹೊಸಮುಖ ಆಯಾಮ ಒದಗಿಸಿದ ಅವರ ಸ್ಟೋಪಜ್ಞತೆಯನ್ನು ಲಾಂಗೂಲ್ಯವನ್ನು ಪತ್ರಿಕಾ ಪ್ರಪಂಚ ನಿಡುಗಾಲ ಕೊಂಡಾಡುವುದು.

- ಕು. ಶಿ. ಹರಿದಾಸ ಭಟ್ಟ,

ರಾಘವೇಂದ್ರ ಪಾಟೀಲ ಅವರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಳು #ಬೆಳ್ಳಕ್ಕಿಗಳ_ಲೋಕದಲ್ಲಿಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶ...
02/06/2026

ರಾಘವೇಂದ್ರ ಪಾಟೀಲ ಅವರ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಳು

#ಬೆಳ್ಳಕ್ಕಿಗಳ_ಲೋಕದಲ್ಲಿ

ಹಾಗೂ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ
#ತೇರು

ಎರಡೂ ಕೃತಿಗಳು ಮರುಮುದ್ರಗೊಂಡು ಈಗ ಲಭ್ಯವಿವೆ.
ಸಂಪರ್ಕಿಸಿ : 9980633644

ಬೆಳ್ಳಕ್ಕಿಗಳ‌ ಲೋಕದಲ್ಲಿ

ಪಾಟೀಲರ ಸಂವೇದನೆಯ ಸ್ವರೂಪ ಗ್ರಾಮೀಣ ಹಾಗೂ ಸಾಮುದಾಯಕವಾದದ್ದು. ಈ ಸಂವೇದನೆಯೇ ಅವರ ವಸ್ತು, ಪಾತ್ರ ಹಾಗೂ ಶೈಲಿಗಳನ್ನು ರೂಪಿಸುತ್ತದೆ.

ಆದರೆ, ಬದುಕನ್ನು ಅವರು ನೋಡುವ ದೃಷ್ಟಿಯಲ್ಲಿ ಆಧುನಿಕತೆ ಇದೆ. ಈ ದೃಷ್ಟಿ ನಿರ್ಲಿಪ್ತ ಹಾಗೂ ವಸ್ತುನಿಷ್ಠವಾದದ್ದು. ಈ ಅಂಶ ಚರಿತ್ರೆಯನ್ನು ಭಾವನಾತ್ಮಕವಾಗಿ ಅನುಭವಿಸಿದ ಆನಂದಕಂದರಿಂದ ಇವರನ್ನು ಬೇರ್ಪಡಿಸುತ್ತದೆ. ಪಾಟೀಲರ ಆಧುನಿಕತೆಯ ಇನ್ನೊಂದು ಲಕ್ಷಣವೆಂದರೆ, ಬದುಕಿನಲ್ಲಿ ಸಫಲತೆಗಿಂತ ಸೋಲು ಹಾಗೂ ಅವನತಿಗಳೇ ಅವರ ದರ್ಶನದ ಪ್ರಮುಖ ಅಂಶಗಳಾಗಿರುವುದು. ಇದರ ಅರ್ಥ ಅವರು ಬದುಕನ್ನು ಸರಳಗೊಳಿಸುತ್ತಾರೆ ಎಂದೇನಲ್ಲ. ಬದುಕನ್ನು ಅವರು ವಿಸ್ಮಯದಿಂದಲೇ ನೋಡುತ್ತಾರೆ ಹಾಗೂ ಅವರ ಸೃಜನಶೀಲತೆ ಬದುಕಿನ ರಹಸ್ಯಗಳಿಗೆ ಆಕಾರ ಕೊಡುವುದರಲ್ಲಿಯೇ ತನ್ನ ಶಕ್ತಿಯನ್ನು ವಿನಿಯೋಗಿಸುತ್ತದೆ. ಕಥೆಯ ಮಾಧ್ಯಮವನ್ನು ಪಾಟೀಲರು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ್ದಾರೆ. ಒಂದು ಅನುಭವ ಕತೆಯಾದಾಗ ಮಾತ್ರ ಅದನ್ನು ನಿಷ್ಠೆ ಹಾಗೂ ನಿರ್ಲಿಪ್ತತೆಗಳಿಂದ ನೋಡಲು ಸಾಧ್ಯವಾಗುತ್ತದೆ ಎನ್ನುವುದು ಅವರ ಗಟ್ಟಿಯಾದ ನಂಬಿಕೆಯಾಗಿದೆ.

-ಡಾ. ಜಿ. ಎಸ್. ಆಮೂರ

ತೇರು

ಜಗತ್ತಿನ ಇದುವರೆಗಿನ ಯಾವುದೇ ಧರ್ಮಗಳಾಗಲೀ, 'ಇಸಂ' ಎಂದು ಕರೆಸಿಕೊಳ್ಳುವ ಯಾವುದೇ ವೈಚಾರಿಕತೆಗಳಾಗಲೀ, ಸಾಮಾಜಿಕತೆ ಮತ್ತು ಅದರಲ್ಲಿ ಅಂತರ್ಗತವಾದ ಕುಟುಂಬ ವ್ಯಕ್ತಿಗಳ ಬದುಕು ಮತ್ತು ಅಂತರಂಗಗಳ ಸಮಗ್ರ ವಿನ್ಯಾಸವನ್ನು ಹಿಡಿದು ಕೊಡಲಾರವು ಮತ್ತು ಇವುಗಳ ಆತ್ಯಂತಿಕ ವಿನ್ಯಾಸವನ್ನು ಹಿಡಿದು ಕೊಡಬೇಕೆನ್ನುವ ಮಹತ್ವಾಕಾಂಕ್ಷೆ ಮನುಷ್ಯನೊಬ್ಬನನ್ನು ಕಲೆಗಾರನನ್ನಾಗಿಸುತ್ತದೆ. ಈ ವಿನ್ಯಾಸ ಇದುವೇ, ಇದಲ್ಲದೆ ಬೇರಲ್ಲ ಎಂತೆನ್ನುವ ತನಕ ಕಲಾವಿದನ ಮತ್ತು ಕಲೆಯ ಸ್ವರೂಪದ ವಿಕಾಸ ನಡೆಯುತ್ತಲೇ ಇರಬೇಕು. ಹೀಗೆಂತಲೇ ಪ್ರತಿಯೊಂದು ಯುಗದಲ್ಲಿಯೂ ಕಲೆಗಾರನಿಗೊಂದು ಕೆಲಸ ಇದ್ದೇ ಇದೆ... ಅನಂತವಾದ ಗೋಡೆಗಳನ್ನು ಕೆಡವುತ್ತ ಹೊಸ ಹೊಸ ಬಯಲುಗಳನ್ನು ಸೇರಿಸುತ್ತಲೇ ಇರಬೇಕವನು... ತುದಿಯೆಂಬುದೇ ಇಲ್ಲ ನಿರಂತರವಾದ ಈ ಪ್ರಕ್ರಿಯೆಗೆ. ಈ 'ತುದಿಯಿಲ್ಲದತನ'ದ ನಿರಂತರ ಪ್ರಕ್ರಿಯೆಯ ಒಂದು ತಾತ್ಕಾಲಿಕ ನಿಲುಗಡೆಯಾಗಿದೆ ನನ್ನ ಈ 'ತೇರು' ಕಥಾನಕ. ನನ್ನ ಈ ಕಥಾನಕವು ಸಾಧಿಸಿಕೊಂಡ ಹೊಸ ಬಯಲು ಮನುಷ್ಯತ್ವದ ಇನ್ನಷ್ಟು ಮೌಲ್ಯಗಳನ್ನು, ರಾಕ್ಷಸತ್ವದ ಕ್ರೌರ್ಯಗಳನ್ನು ಮತ್ತು ದೈವಿಕತೆಯ ಮತ್ತಷ್ಟು ನಿಗೂಢಗಳನ್ನು ನಿಮ್ಮ ಮುಂದಿಡುತ್ತದೆ.

 #ಹೊಸತುನುಡಿ ಚಮ್ಮಾಳಿಗೆತೆಲುಗು ಮೂಲ : ಯಂಡ್ಲೂರಿ ಸುಧಾಕರ್ಕನ್ನಡಕ್ಕೆ           : ವಿಕಾಸ್ ಆರ್. ಮೌರ‌್ಯಬೆಲೆ                : 240/- (ಶ...
31/05/2026

#ಹೊಸತು

ನುಡಿ ಚಮ್ಮಾಳಿಗೆ

ತೆಲುಗು ಮೂಲ : ಯಂಡ್ಲೂರಿ ಸುಧಾಕರ್
ಕನ್ನಡಕ್ಕೆ : ವಿಕಾಸ್ ಆರ್. ಮೌರ‌್ಯ
ಬೆಲೆ : 240/- (ಶಿಪ್ಪಿಂಗ್ ಸೇರಿ)
ಸಂಪರ್ಕಿಸಿ : 099806 33644

"ನುಡಿ ಚಮ್ಮಾಳಿಗೆ" ಹೆಸರೇ ಹೇಳುವಂತೆ ನುಡಿಯನ್ನ ಹದಗೊಳಿಸಿ ಕಟ್ಟಿರುವ ದಲಿತ ಸಂಕಥನಗಳ ಅತ್ಯದ್ಭುತ ಕಟ್ಟು, ಎಂಡೂರಿ ಸುಧಾಕರ್ ಅವರ ತೆಲುಗು ಮೂಲದ ಮಲ್ಲೆ ಮೊಗ್ಗುಲ ಗೊಡುಗು ಎಂಬ ಸಮುದಾಯ ಕಥನವನ್ನು ವಿಕಾಸ್ ಆರ್. ಮೌಲ್ಯ ಕನ್ನಡಕ್ಕೆ ಅದರಲ್ಲೂ ಮಂಡ್ಯ-ಕೆ.ಆರ್. ಪೇಟೆಯ ಲಯಬದ್ಧ ಭಾಷಾ ಶೈಲಿಗೆ ಅನುವಾದಿಸಿದ್ದಾರೆ.

ಅವಿಭಜಿತ ಆಂಧ್ರದ ಮಾದಿಗ ಸಮುದಾಯದ ಕಥನವನ್ನ ಎಂದ್ದೂರಿ ಸುಧಾಕರ್ ರವರು ಕಥೆಯಾಗಿಸಿದ್ದಾರೆ, ಆ ಅನುಭವ ನಮ್ಮದೇ ನೆಲದ ಕಥೆಗಳಾಗಿ ಹೋಗುವಂತೆ ವಿಕಾಸ್ ಅವರು ಸರಳವಾಗಿ ಅಷ್ಟೇ ಪ್ರಬುದ್ಧವಾಗಿ ಕನ್ನಡಕ್ಕೆ ತಂದಿದ್ದಾರೆ. ಮಾದಿಗರ ಆದಿಗ ಜಾಂಬುವಂತ ಕಥನದಿಂದ ಹಿಡಿದು, ಇಡೀ ಮಾದಿಗ ಸಮುದಾಯದ ನೋವು, ನಲಿವು, ಅಸಹಾಯಕತೆ, ಶಕ್ತಿ, ಸಾಮರ್ಥ್ಯ, ದಲಿತ ಮಹಿಳಾಲೋಕದ ಅಂತಃಶಕ್ತಿ ಎಲ್ಲವುಗಳನ್ನ ಹದಗೊಳಿಸಿ ಇಲ್ಲಿನ ಕಥೆಗಳೊಳಗೆ ಕಟ್ಟಿಟ್ಟಿದ್ದಾರೆ. ಕಥನಗಳ ಉದ್ದಕ್ಕೂ ದಲಿತರ ಸೈರಣೆಯ ಶಕ್ತಿಯಾಗಿ ತಮಟೆಯ ನಾದ ಕೇಳುತ್ತಲೇ ಇರುತ್ತದೆ. ಶ್ರಮಸಂಸ್ಕೃತಿಯ ಭಾಗವಾಗಿ ದಲಿತರ ಬದುಕಿನ ಎಲ್ಲಾ ಮಜಲುಗಳನ್ನೂ ಒಳಗೊಂಡ ಈ ಕಥನಗಳು ಒಂದಕ್ಕೊಂದು ಹೆಣೆದುಕೊಂಡೇ ಇಡೀ ದಲಿತ ಜಗತ್ತಿನ ಸಾಂಸ್ಕೃತಿಕ, ಸಮಾಜೋ ಆರ್ಥಿಕ ವಿಚಾರಗಳನ್ನು ನಮ್ಮ ಮುಂದಿಡುತ್ತವೆ. ಈ ಮೂಲಕ ಹೊಸ ತಲೆಮಾರಿಗೆ ದಲಿತ ಇತಿಹಾಸವನ್ನು ದಾಟಿಸುವ ಅತೀ ದೊಡ್ಡ ಕೆಲಸ ಈ ಪುಸ್ತಕದಲ್ಲಿದೆ.

~ಮಂಜುಳಾ ಹುಲಿಕುಂಟೆ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಸಾಹಿತಿಸಲೀಂ ಅವರ ಕಾದಂಬರಿದಯಾಮರಣಕನ್ನಡಕ್ಕೆ     : ಜಿ. ವೀರಭದ್ರಗೌಡಬೆಲೆ          ...
29/05/2026

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಸಾಹಿತಿ

ಸಲೀಂ ಅವರ ಕಾದಂಬರಿ
ದಯಾಮರಣ

ಕನ್ನಡಕ್ಕೆ : ಜಿ. ವೀರಭದ್ರಗೌಡ
ಬೆಲೆ : 330/-
ಸಂಪರ್ಕಿಸಿ : 099806 33644

ದಯಾಮಾಡಿ ಸಾಯಲು ಅನುಮತಿ ಕೊಡಿ- ಎಂಬ ಬೇಡಿಕೆ ಜೀವಿಯ ಸ್ವಭಾವಕ್ಕೆ ವಿರುದ್ಧವಾದದ್ದು. ಇಂತಹ ಕ್ಲಿಷ್ಟವಾದ ಬೇಡಿಕೆಯನ್ನು ಈ ಕಾದಂಬರಿಯು ವಿವಿಧ ಕೋನಗಳಿಂದ ಚರ್ಚಿಸುತ್ತದೆ. ನೋವು-ಸಾವು-ಬದುಕು ಇವುಗಳ ವರ್ತುಲ ಸಂಬಂಧದ ತರ್ಕವು ಕೇವಲ ತರ್ಕವಾಗಿರದೆ ಅರಿವಾಗಿ ಕಾದಂಬರಿಯುದ್ದಕ್ಕೂ ಹರಡಿಕೊಂಡಿದೆ. ಮರಣವನ್ನು ಬೇಡುವ ಹೋರಾಟದ ಸೋಲಿನಲ್ಲಿ ಗೆಲುವನ್ನು ಹುಡುಕುತ್ತಾ ಕಾದಂಬರಿಯು ನಮ್ಮನ್ನು ಗೆಲ್ಲುತ್ತದೆ.

ಮನ್ಮೂಲರ್ ಡಿಸ್ಟೋಫೀ(ಅನುವಂಶಿಯ ಕಾಯಿಲೆ )ಯನ್ನು ಭಿತ್ತಿಯಾಗಿಸಿಕೊಂಡದ್ದೆ ಇಲ್ಲಿಯ ಯಶಸ್ವಿಗೆ ಮುಖ್ಯ ಕಾರಣವೆನಿಸಿದರೂ, ಅದರ ಮಾಹಿತಿಯನ್ನು ಸಮಗ್ರವಾಗಿಸುವುದರೊಂದಿಗೆ ಪೂರಕವಾಗಿ ಬೆಳೆದ ವೈದ್ಯಕೀಯ ಹಾಗೂ ಕಾನೂನಾತ್ಮಕ ವಿಶ್ಲೇಷಣೆಗಳು ದಟ್ಟವಾದ ವಾಸ್ತವಾನುಭವಗಳಾಗಿವೆ. ಸಂದರ್ಭದ ಬಿಕ್ಕಟ್ಟಿಗೆ ಮನುಷ್ಯನ ಮನೋಲೋಕದ ಪರ್ಯಟನೆಯು ಬೆರಗುಮೂಡಿಸುತ್ತದೆ. ಸಿಲುಕಿದ

ನಾನು ವೈದ್ಯನಾಗಿ, ವೈದ್ಯಸಾಹಿತಿಯಾಗಿ ಸಮಾಜ ಸೇವೆಯನ್ನು ಬಹುಮಾದರಿಯಲ್ಲಿ ಕೈಗೊಳ್ಳುತ್ತಿದ್ದರೂ ಸಮಾಧಾನವೆಂಬುದು ಬಹುದೂರ ಉಳಿಯುತ್ತದೆ. ಸವಾಲುಗಳು ಸರದಿಯಲ್ಲಿ ನಿಲ್ಲುತ್ತಾ ನಮ್ಮನ್ನು ಮತ್ತೆ ಹೊಸ ಯೋಜನೆಗೆ ಸಜ್ಜುಗೊಳಿಸುತ್ತದೆ. ಲೇಖಕರು, ಸಮಾಲೋಚಕರು ಇಂತಹ ಪ್ರಯತ್ನಗಳಿಂದ ನಮ್ಮ ಸಹಯಾತ್ರಿಕರಾಗಿ ಪಯಣಿಸುತ್ತಿರುವುದು ಗೌರವಿಸಿಕೊಳ್ಳುತ್ತದೆ.

ಡಾ. ಕರವೀರಪ್ರಭು ಕ್ಯಾಲಕೊಂಡ

ಮೈಸೂರಿನ ಕೃಷಿ ಇತಿಹಾಸ (1870-1945) (ಸಂಶೋಧನಾ ಕೃತಿ)ಲೇಖಕರು   : ಪ್ರೊ. ಎಂ. ನಾರಾಯಣ ಸ್ವಾಮಿಬೆಲೆ           : 400/-ಶಿಪ್ಪಿಂಗ್     : ಉಚ...
25/05/2026

ಮೈಸೂರಿನ ಕೃಷಿ ಇತಿಹಾಸ (1870-1945)
(ಸಂಶೋಧನಾ ಕೃತಿ)

ಲೇಖಕರು : ಪ್ರೊ. ಎಂ. ನಾರಾಯಣ ಸ್ವಾಮಿ
ಬೆಲೆ : 400/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ಪತ್ರಾಗಾರ ಇಲಾಖೆಯಲ್ಲಿ 1870ರಿಂದ 1945ರವರೆಗೆ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ರಚಿಸಿರುವ 'ಮೈಸೂರಿನ ಕೃಷಿ ಇತಿಹಾಸ' ಕೃತಿ ವ್ಯಾಪಕವಾಗಿ ಜನರನ್ನು ತಲುಪಲಿ ಎಂದು ಹಾರೈಸುತ್ತೇನೆ.

- ಸಿದ್ದರಾಮಯ್ಯನವರು, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ನೆಲದ ಅನ್ನದ ಸಂಸ್ಕೃತಿಯ ಬಗ್ಗೆ "ಮೈಸೂರು ಕೃಷಿ ಇತಿಹಾಸ" ಬೆಳಕು ಚೆಲ್ಲಲಿ ಎಂದು ಅರಿಕೆ ಮಾಡಿಕೊಳ್ಳುತ್ತೇನೆ.

ಡಿ. ಕೆ. ಶಿವಕುಮಾರ್‌ರವರು, ಉಪ ಮುಖ್ಯಮಂತ್ರಿಗಳು

'ಮೈಸೂರಿನ ಕೃಷಿ ಇತಿಹಾಸ' ಪುಸ್ತಕವು ಸಂಗ್ರಹಯೋಗ್ಯ ಕೃತಿಯಾಗಿ ಮೂಡಿಬರಲೆಂದು ಹಾರೈಸುತ್ತಾ, ಪ್ರೊ. ನಾರಾಯಣ ಸ್ವಾಮಿರವರಿಗೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ.

ಡಾ. ಜಿ. ಪರಮೇಶ್ವರರವರು, ಗೃಹ ಸಚಿವರು

ಲೇಖಕರು ನಿವೃತ್ತಿಯ ದಿನಗಳಲ್ಲೂ ಸಾಮಾಜಿಕ ಬದ್ದತೆಯಿಂದ ಅಧ್ಯಯನ, ಸಂಶೋಧನೆಗಳತ್ತ ತೊಡಗಿಸಿಕೊಂಡು ಮುನ್ನಡೆದಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ.

ಡಾ. ಹೆಚ್.

ಸಿ. ಮಹದೇವಪ್ಪನವರು, ಸಮಾಜ ಕಲ್ಯಾಣ ಸಚಿವರು

ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ವಿಶೇಷ ಆಸಕ್ತಿಯಿಂದಾಗಿ ರಾಜ್ಯದಲ್ಲಿ ಕೃಷಿಯ ಅಭಿವೃದ್ಧಿಯಾಯಿತು. 'ಮೈಸೂರಿನ ಕೃಷಿ ಇತಿಹಾಸ'ವು ಹೆಚ್ಚು ಓದುಗರನ್ನು ತಲುಪಲಿ ಎಂದು ಹಾರೈಸುತ್ತೇನೆ.

ಎನ್. ಚಲುವರಾಯಸ್ವಾಮಿಯವರು, ಕೃಷಿ ಸಚಿವರು

'ಮೈಸೂರಿನ ಕೃಷಿ ಇತಿಹಾಸ' ಕೃತಿ ಎಲ್ಲರನ್ನು ತಲುಪಲಿ ಎಂದು ಶುಭಹಾರೈಸುತ್ತೇನೆ.

-ಕೆ. ವೆಂಕಟೇಶ್‌ರವರು, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದಲೇಖಕರು  : ಡಾ. ದತ್ರಪ್ರಸಾದ ದಾಬೋಲ್ಕರ್ಅನುವಾದ : ಚಂದ್ರಕಾಂತ ಪೋಕಳೆಬೆಲೆ       ...
13/05/2026

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದ

ಲೇಖಕರು : ಡಾ. ದತ್ರಪ್ರಸಾದ ದಾಬೋಲ್ಕರ್
ಅನುವಾದ : ಚಂದ್ರಕಾಂತ ಪೋಕಳೆ
ಬೆಲೆ : 395/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದರ ಜೀವನ ಮತ್ತು ವಿಚಾರಗಳ ಬಗೆಗೆ ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಖೇದದ ಸಂಗತಿ ಎಂದರೆ ಈ ಬರಹಗಳೆಲ್ಲ 19ನೇ ಶತಮಾನದ ಆ ಯುವಕನ ಮಾನಸಿಕ ಸಾಮರ್ಥ್ಯ, ಜೀವನ ಸಂಘರ್ಷ, ವೈಚಾರಿಕ ಮತ್ತು ಯುಗಪ್ರವರ್ತಕ ಕಾರ್ಯಗಳಿಗೆ ಆಧ್ಯಾತ್ಮವಾದಿ ಪಾರ ಲೌಕಿಕ ವ್ಯಾಖ್ಯೆಯನ್ನು ನೀಡಿ ಅದನ್ನು ಒಂದು ಮಿಥಿಕ್ ರೂಪದಲ್ಲಿ ಬದಲಾಯಿಸುತ್ತವೆ. ಅದರ ಸತ್ವವನ್ನೇ ಹೊಸಕಿ ಹಾಕುತ್ತವೆ. ಈ ಕೃತಿಯು ಪ್ರಮಾಣ ಸಹಿತ, ಖಚಿತವಾದ ತಪಶೀಲಿನೊಂದಿಗೆ ಆ ವಿವೇಕಾನಂದರನ್ನು, ಅವರ ವಾಸ್ತವ ರೂಪವನ್ನು ತೆರೆದಿಡುತ್ತದೆ. ಇದೊಂದು ಮಹಾಜೀವನದ ಎಂಥ ಪ್ರಾಮಾಣಿಕ ಗಾಥೆ ಎಂದರೆ, ಅವರ ಕಾರ್ಯಗಳನ್ನು, ಆಲೋಚನ ಕ್ರಮವನ್ನು ಮತ್ತು ಯುಗವನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಇದು ವಿವೇಕಾನಂದರನ್ನು ಅರ್ಥಮಾಡಿಕೊಳ್ಳುವ ಏಕೈಕ ಮತ್ತು ಅನನ್ಯವಾದ ಬೌದ್ಧಿಕ ಕಾರ್ಯವಾಗಿದೆ.

#ಸ್ವಾಮಿವಿವೇಕಾನಂದ

ಬೆತ್ತಲೆ ವೃಕ್ಷಲೇಖಕರು  : ಡಾ. ಸಿ.ಜಿ. ಲಕ್ಷ್ಮೀಪತಿಬೆಲೆ          : 340/-ಶಿಪ್ಪಿಂಗ್    : ಉಚಿತಸಂಪರ್ಕಿಸಿ : 099806 33644 ಲೈಂಗಿಕತೆಯ ಸ...
13/05/2026

ಬೆತ್ತಲೆ ವೃಕ್ಷ

ಲೇಖಕರು : ಡಾ. ಸಿ.ಜಿ. ಲಕ್ಷ್ಮೀಪತಿ
ಬೆಲೆ : 340/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ಲೈಂಗಿಕತೆಯ ಸಂಕೀರ್ಣತೆಯನ್ನು ಬಿಚ್ಚಿಟ್ಟು ಪೂರ್ವಗ್ರಹಗಳನ್ನು ಕೆಣಕುವ ಮತ್ತು ಅರಿವನ್ನು ಹಿಗ್ಗಿಸುವ ವಿಶಿಷ್ಟ ಕೃತಿ ಬೆತ್ತಲೆವೃಕ್ಷ. ಭಾರತದ ಸಂದರ್ಭದಲ್ಲಿ ಲೈಂಗಿಕತೆಯ ಕುರಿತಾಗಿ ನಡೆದಿರುವ ಹುಡುಕಾಟ ಮತ್ತು ಪ್ರಯೋಗಗಳ ಸುತ್ತ ಸಾಂಸ್ಕೃತಿಕ ಮುಕ್ತತೆಗಳಿರುವಂತೆಯೇ ವಿನಾಶಕಾರಿ ಮಂಡಿವಂತಿಕೆಯೂ ಇದೆ. ಸಾಮಾಜಿಕ ರಚನೆಗಳನ್ನೇ ನಿಯಂತ್ರಣ ಮಾಡಲು ಲೈಂಗಿಕತೆಯನ್ನು ಟೂಲಾಗಿ ಬಳಸಲ್ಪಡುವ ಬಗ್ಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಈ ಕೃತಿ ಚರ್ಚಿಸಿದೆ.

ವೇದ, ವಾತ್ಸಾಯನನ ಕಾಮಸೂತ್ರದಂತಹ ಕೃತಿಗಳಲ್ಲಿ ಬರುವ ಲೈಂಗಿಕತೆಯ ವಿಚಾರಗಳನ್ನು ಈ ಕಾಲದ ಲೈಂಗಿಕ ರಾಜಕಾರಣದ ಜೊತೆಗಿಟ್ಟು ವಿಶ್ಲೇಷಿಸುವಂತೆಯೇ, ಗಾಂಧಿ ಮತ್ತು ಓಶೋ ಅಂತವರ ಲೈಂಗಿಕತೆಯ ಕುರಿತಾದ ದೃಷ್ಟಿಕೋನಗಳ ಚರ್ಚೆಯನ್ನು ಈ ಕೃತಿ ಒಳಗೊಂಡಿರುವುದು ಮಹತ್ವದ್ದಾಗಿದೆ.

- ಕೆ. ಮುರಳಿ ಮೋಹನ್ ಕಾಟಿ

Address

2nd Block Jayanagar
Bangalore
560011

Alerts

Be the first to know and let us send you an email when Book Circle posts news and promotions. Your email address will not be used for any other purpose, and you can unsubscribe at any time.

Shortcuts

Share

Category