11/10/2021
ಒಬ್ಬ ಒಳ್ಳೆಯ ಓದುಗ ಒಳ್ಳೆಯ ಲೇಖಕನಾಗುತ್ತಾನೆ ಎನ್ನುವ ಮಾತೊಂದಿದೆ
ಇದನ್ನು ಸಾಧ್ಯವಾಗಿಸಿದ್ದಾರೆ ನಮ್ಮ ಪ್ರೀತಿಯ ಓದುಗ ಮಿತ್ರರಾದ ಆತ್ಮೀಯ ಸ್ನೇಹಜೀವಿ ಶ್ರೀಯುತ ಪ್ರದೀಪ್ ಬೇಲೂರು ಅವರು, ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟ್ ವೇರ್ ಉದ್ಯೋಗಿಯಾಗಿ ಜವಬ್ದಾರಿಯುತ ಸ್ಥಾನದಲ್ಲಿರುವ ಪ್ರದೀಪ್ ಅವರು ನಮ್ಮ ಸ್ನೇಹ ದ ಹಿತೈಷಿಗಳು. ಯಾವುದೇ ಹೊಸ ವಿಭಿನ್ನವಾದ ಪುಸ್ತಕಗಳು ಬಂದರೆ ಅದನ್ನು ಖರೀದಿಸಿ ಓದಿ ಕೃತಿಯ ಲೇಖಕರಿಗೆ ಕರೆ ಮಾಡಿ ಚರ್ಚಿಸಿ ಅಭಿನಂದನೆಗಳನ್ನು ತಿಳಿಸುವ ಒಂದು ದೊಡ್ಡ ಗುಣವನ್ನು ಅವರು ಬೆಳೆಸಿಕೊಂಡವರು,ಅವರು ಹತ್ತು ವರ್ಷದ ಪುಟ್ಟ ಮಗನಿಗೂ ಸಹ ಓದುವ ಸಂಸ್ಕ್ರತಿಯನ್ನು ಬೆಳೆಸಿದ್ದಾರೆ,ಅಷ್ಟೇ ಏಕೆ ಅವರ ಇಡೀ ಕುಟುಂಬವೇ ಓದುವ ಸುಸಂಸ್ಕೃತ ವನ್ನು ಬೆಳೆಸಿಕೊಂಡಿದೆ,
ಇದೀಗ ಪ್ರದೀಪ್ ಅವರು ಮೊದಲ ಪ್ರಯತ್ನವಾಗಿ ಒಂದಷ್ಟು ಚೆಂದದ ಕಥೆಗಳ ಬುತ್ತಿಯನ್ನು ಹೊತ್ತು ತಂದಿದ್ದಾರೆ,
"ಎಲವೋ ವಿಭೀಷಣ" ಎನ್ನುವ ಹೆಸರಿನಲ್ಲಿ ಸದ್ಯದಲ್ಲೇ ಬರುತ್ತಿರುವ ಇವರ ಕಥಾ ಸಂಕಲನ ಕ್ಕೆ ಇವರ ಸ್ನೇಹಿತರಾದ ವಿದೇಶದಲ್ಲಿ ನೆಲೆಸಿರುವ ಖ್ಯಾತ ಕಲಾವಿದ ವಿಜಯೇಂದ್ರ ಕಾಮತ್ ಅವರು ಒಂದು ಒಳ್ಳೆಯ ಚಿತ್ರವನ್ನು ಮುಖಪುಟಕ್ಕೆ ಬರೆದುಕೊಟ್ಟಿದ್ದಾರೆ.ಎಂದಿನಂತೆ ಪುಟವಿನ್ಯಾಸ ಮತ್ತು ಮುಖಪುಟ ವಿನ್ಯಾಸವನ್ನು ನಮ್ಮ ಉದಯ್ ಸಿಂಗನಮಲ್ಲಿ ಅವರು ಮಾಡಿದ್ದಾರೆ ಇಬ್ಬರಿಗೂ ಧನ್ಯವಾದಗಳು,
ಪ್ರದೀಪ್ ಬೇಲೂರು ಅವರಿಗೆ ನಿಮ್ಮೆಲ್ಲರ ಪ್ರೀತಿಯ ಹಾರೈಕೆಗಳು ಇರಲಿ ಎನ್ನುವ ಕೋರಿಕೆ ಯೊಂದಿಗೆ ಅವರನ್ನು ಅವರ ಕೃತಿಯನ್ನು ಸ್ನೇಹ ದ ಮೂಲಕ ನಿಮ್ಮೆಲ್ಲರಿಗೂ ಪರಿಚಯಿಸಲು ತುಂಬಾ ಹೆಮ್ಮೆಯಾಗುತ್ತಿದೆ ಖುಷಿಯಾಗುತ್ತಿದೆ
ಪ್ರದೀಪ್ ಬೇಲೂರು ನಿಮಗೆ ಒಳಿತಾಗಲಿ
ಸ್ನೇಹ ಸದಾ ನಿಮ್ಮ ಜೊತೆಗಿರುತ್ತದೆ
____________
ಇವತ್ತಿನಿಂದ PRE-ORDER ಪ್ರಾರಂಭಿಸುತ್ತಿದ್ದೇವೆ
ಕೆಳಗಿನ ನಂಬರಿಗೆ Watsapp ಮೂಲಕ ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿಕೊಳ್ಳಿ
ಧನ್ಯವಾದಗಳು
_________
ಸ್ನೇಹ - 9845031335